ಹಣದ ವಿಚಾರದಲ್ಲಿ ಗಲಾಟೆ: ಚೂರಿ ಇರಿತ; ಆಸ್ಪತ್ರೆಗೆ - Jayakirana Morning News
Headlines News :
Home » , , » ಹಣದ ವಿಚಾರದಲ್ಲಿ ಗಲಾಟೆ: ಚೂರಿ ಇರಿತ; ಆಸ್ಪತ್ರೆಗೆ

ಹಣದ ವಿಚಾರದಲ್ಲಿ ಗಲಾಟೆ: ಚೂರಿ ಇರಿತ; ಆಸ್ಪತ್ರೆಗೆ

Written By Umanatha Shetty on Thursday, 21 August 2014 | 22:21


ಮಂಗಳೂರು: ಹಣದ ವಿಚಾರಕ್ಕೆ ಸಂಬಂಧಿಸಿ ಮೀನು ಸಾಗಾಟದ ಲಾರಿ ಚಾಲಕರ ಮಧ್ಯೆ ಹೊಡೆದಾಟ ಸಂಭವಿಸಿ ಓರ್ವ ಚೂರಿ ಇರಿತದಿಂದ ಗಾಯಗೊಂಡರೆ ಇನ್ನೋರ್ವನಿಗೆ ಹೊಡೆದಾಟದ ಸಂದರ್ಭದಲ್ಲಿ ತಲೆಗೆ ಏಟು ಬಿದ್ದಿದ್ದು, ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಡೆದಾಟದಲ್ಲಿ ಗಾಯಗೊಂಡ ವರನ್ನು ಹಳೆಕೋಟೆ ನಿವಾಸಿಗಳಾದ ಇಕ್ಬಾಲ್ ಮತ್ತು ಶರೀಫ್ ಎಂಬವ ರಾಗಿದ್ದು, ಇಬ್ಬರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.
ಹಣದ ವಿಚಾರದಲ್ಲಿ ಗಲಾಟೆ : ಶರೀಫ್ ಮೀನು ಸಾಗಾಟದ ವಾಹನ ದಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಸಂಜೆ ಕೇರಳದಿಂದ ಮೀನು ಸಾಗಾಟ ನಡೆಸಿ ಹಳೆಕೋಟೆಗೆ ಬರುತ್ತಿದ್ದಾಗ ಇಕ್ಬಾಲ್ ಶರೀಫ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಶರೀಫ್ ನೀಡಿದ ಹೇಳಿಕೆಯಂತೆ ತಾನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಇಕ್ಬಾಲ್ ಬಿಯರ್ ಬಾಟಲ್‍ಗಳನ್ನು ಹಿಡಿದುಕೊಂಡು ತನ್ನಲ್ಲಿ ಹಣ ಕೇಳಿದ್ದು, ನನ್ನಲ್ಲಿ ಹಣ ಇಲ್ಲ ಎಂದಾಗ ಬಾಟಲ್ ಮತ್ತು ಕತ್ತಿಯೊಂದರಲ್ಲಿ ಹಲ್ಲೆ ನಡೆಸಿದ್ದು ನಾನು ಪ್ರಜ್ಞÉ ತಪ್ಪಿ ಬಿದ್ದಾಗ ಸೊಂಟಕ್ಕೆ ಕಾಲಿನಿಂದ ತುಳಿದಿದ್ದ ಎಂದು ಹೇಳಿ ದ್ದಾರೆ. ಶರೀಫ್ ಅವರ ಭುಜಕ್ಕೆ ಕತ್ತಿಯೇಟು ಬಿದ್ದಿದ್ದು, ಕಾಲು ಮತ್ತು ಸೊಂಟಕ್ಕೆ ಪೆಟ್ಟಾಗಿದೆ. ಇಕ್ಬಾಲ್ ಪ್ರತಿಯಾಗಿ ಶರೀಫ್ ತಾನು ರಸ್ತೆಯಲ್ಲಿ ಹೋಗುತ್ತಿದ್ದಾಗ ಏನು ನೀನು ಟಿಪ್‍ಟಾಪಾಗಿ ಹೋಗುತ್ತಿ ಎಂದು ಹೇಳಿ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾನೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Share this article :

0 comments:

Speak up your mind

Tell us what you're thinking... !

 
Support : Creating Website | Johny Template | Mas Template
Copyright © 2011. Jayakirana Morning News - All Rights Reserved
Template Created by Creating Website Published by Mas Template
Proudly powered by Premium Blogger Template