ಬೆಳ್ತಂಗಡಿ: ಬಂಟ್ವಾಳ ತಾಲೂಕು ಮಾರಿಪಳ್ಳ ರಿಕ್ಷಾ ಚಾಲಕ ಮಹಮ್ಮದ್ ರಿಫಾಯಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದಾನೆ ಎಂಬ ನೆಲೆಯಲ್ಲಿ ಗಣೇಶ್ ಗೌಡ ಎಂಬಾತನನ್ನು ಬಂಟ್ವಾಳ ಪೊಲೀಸರು ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಧಿಸಿರುವ ಘಟನೆ ತಡವಾಗಿ ವರದಿಯಾಗಿದೆ.
ಉಜಿರೆ ಗ್ರಾಮದ ಕಾಶಿಬೆಟ್ಟು ಅರಳಿ ಸನಿಹದ ನಿವಾಸಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮಹಾ ದ್ವಾರದ ಬಳಿಯ ಗೂಡಂಗಡಿಯಲ್ಲಿ ಕಬ್ಬಿನ ಹಾಲು ತೆಗೆಯುವ ಕಾರ್ಮಿಕ ನಾಗಿ ದುಡಿಯುತ್ತಿದ್ದ ಗಣೇಶ್ ಗೌಡ(26) ಬಂಧಿತ ಯವಕ. ಪ್ರಕರ ಣದಲ್ಲಿ ಇತರ 7 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದೆ. ಈ ಎಲ್ಲಾ ಆರೋಪಿಗಳು ಒಂದೊಂದು ರೀತಿ ಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನ ಲಾಗಿದೆÉ. ಈ ಪೈಕಿ ಉಜಿರೆಯಿಂದ ಬಂಧಿಸಲ್ಪಟ್ಟಿರುವ ಗಣೇಶ್ ಗೌಡ ಘಟನಾ ದಿನ ಹಂತಕರೊಂದಿಗೆ ನೇರ ಶಾಮೀಲಾಗಿ ರಿಫಾಯಿ ರಿಕ್ಷಾವನ್ನು ಬಾಡಿಗೆಗೆ ಎಂಗೇಜ್ ಮಾಡಿಕೊಂಡು ಕೊಲೆಗಾರರಿಗೆ ತಮ್ಮ ಕೃತ್ಯ ವೆಸಗಲು ಅನುಕೂಲ ಮಾಡಿ ಕೊಟ್ಟಿದ್ದಾನೆಂದು ಆತ ತಪ್ಪೊಪ್ಪಿಕೊಂಡಿರುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.
ಬಡ್ಡಿ ವ್ಯಾಪಾರ ದಂಧೆಯಲ್ಲಿ ನಿರತನಾಗಿದ್ದ ಗಣೇಶ: ಉಜಿರೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದನಾದರೂ ಆತ ಕೈತುಂಬಾ ಹಣ ಇಟ್ಟುಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಗ್ರಾಹಕರಿಂದ ಹೆಚ್ಚು ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ಮಾತ್ರವಲ್ಲದೆ, ಹಣ ಕೊಡಲು ಒಂದು ದಿನ ತಡವಾದರೂ ಅವರ ಮೇಲೆ ಮನ ಬಂದಂತೆ ಹಲ್ಲೆ ನಡೆಸುವ ಚಾಳಿ ಹೊಂದಿದ್ದ. ತಾನು ದುಡಿಯುತ್ತಿದ್ದ ಅಂಗಡಿಯಿಂದಲೇ ಹಣ ಕದಿಯುವ ಚಾಳಿಯಿದ್ದ ಗಣೇಶ ಅದೇ ಹಣದಿಂದಲೇ ಲಾರಿಯೊಂದನ್ನು ಖರೀದಿಸಿದ್ದ. ಬಳಿಕ ಸರಿಯಾಗಿ ಕಂತಿನ ಹಣ ಪಾವತಿಸದ ಕಾರಣ ಲಾರಿಯನ್ನು ಜಪ್ತಿ ಮಾಡಲಾಗಿತ್ತು. ಉಜಿರೆ ಪರಿಸರದಲ್ಲಿ ನಡೆಯುತ್ತಿದ್ದ ಗುಂಪು ಘರ್ಷಣೆ, ದೊಂಬಿ, ಹಲ್ಲೆ, ನೈತಿಕ ಪೊಲೀಸ್ಗಿರಿ, ಬಲತ್ಕಾರದ ವಸೂಲಿ ಬಾಜಿಯಲ್ಲಿ ಈತನು ಭಾಗಿಯಾಗುತ್ತಿದ್ದ. ಈತನ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲವಾರು ಕೇಸು ದಾಖಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲೂ ಈತ ಕೈಯಾಡಿಸಿದ್ದ. ಇತ್ತೀಚೆಗೆ ಬಂಟ್ವಾಳ, ಮಂಗಳೂರಲ್ಲಿ ಕೆಲವರ ಸಂಪರ್ಕ ಸಾಧಿಸಿಕೊಂಡು ದೊಡ್ಡ ಮಟ್ಟದ ಹಣದ ವ್ಯವಹಾರ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆ ಈತನ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸು ದಾಖಲಾಗಿದೆ. ಇದರಿಂದಾಗಿ ಕಂಗೆಟ್ಟು ತಾಲೂಕಿನಿಂದಲೇ ಪರಾರಿಯಾಗಿ ಬಂಟ್ವಾಳದಲ್ಲಿ ತಾತ್ಕಾಲಿಕವಾಗಿ ಉಳಿದು ಕೊಂಡಿದ್ದ ಎಂದು ತಿಳಿದುಬಂದಿದೆ.
ಉಜಿರೆ ಗ್ರಾಮದ ಕಾಶಿಬೆಟ್ಟು ಅರಳಿ ಸನಿಹದ ನಿವಾಸಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮಹಾ ದ್ವಾರದ ಬಳಿಯ ಗೂಡಂಗಡಿಯಲ್ಲಿ ಕಬ್ಬಿನ ಹಾಲು ತೆಗೆಯುವ ಕಾರ್ಮಿಕ ನಾಗಿ ದುಡಿಯುತ್ತಿದ್ದ ಗಣೇಶ್ ಗೌಡ(26) ಬಂಧಿತ ಯವಕ. ಪ್ರಕರ ಣದಲ್ಲಿ ಇತರ 7 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದೆ. ಈ ಎಲ್ಲಾ ಆರೋಪಿಗಳು ಒಂದೊಂದು ರೀತಿ ಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನ ಲಾಗಿದೆÉ. ಈ ಪೈಕಿ ಉಜಿರೆಯಿಂದ ಬಂಧಿಸಲ್ಪಟ್ಟಿರುವ ಗಣೇಶ್ ಗೌಡ ಘಟನಾ ದಿನ ಹಂತಕರೊಂದಿಗೆ ನೇರ ಶಾಮೀಲಾಗಿ ರಿಫಾಯಿ ರಿಕ್ಷಾವನ್ನು ಬಾಡಿಗೆಗೆ ಎಂಗೇಜ್ ಮಾಡಿಕೊಂಡು ಕೊಲೆಗಾರರಿಗೆ ತಮ್ಮ ಕೃತ್ಯ ವೆಸಗಲು ಅನುಕೂಲ ಮಾಡಿ ಕೊಟ್ಟಿದ್ದಾನೆಂದು ಆತ ತಪ್ಪೊಪ್ಪಿಕೊಂಡಿರುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.
ಬಡ್ಡಿ ವ್ಯಾಪಾರ ದಂಧೆಯಲ್ಲಿ ನಿರತನಾಗಿದ್ದ ಗಣೇಶ: ಉಜಿರೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದನಾದರೂ ಆತ ಕೈತುಂಬಾ ಹಣ ಇಟ್ಟುಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಗ್ರಾಹಕರಿಂದ ಹೆಚ್ಚು ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ಮಾತ್ರವಲ್ಲದೆ, ಹಣ ಕೊಡಲು ಒಂದು ದಿನ ತಡವಾದರೂ ಅವರ ಮೇಲೆ ಮನ ಬಂದಂತೆ ಹಲ್ಲೆ ನಡೆಸುವ ಚಾಳಿ ಹೊಂದಿದ್ದ. ತಾನು ದುಡಿಯುತ್ತಿದ್ದ ಅಂಗಡಿಯಿಂದಲೇ ಹಣ ಕದಿಯುವ ಚಾಳಿಯಿದ್ದ ಗಣೇಶ ಅದೇ ಹಣದಿಂದಲೇ ಲಾರಿಯೊಂದನ್ನು ಖರೀದಿಸಿದ್ದ. ಬಳಿಕ ಸರಿಯಾಗಿ ಕಂತಿನ ಹಣ ಪಾವತಿಸದ ಕಾರಣ ಲಾರಿಯನ್ನು ಜಪ್ತಿ ಮಾಡಲಾಗಿತ್ತು. ಉಜಿರೆ ಪರಿಸರದಲ್ಲಿ ನಡೆಯುತ್ತಿದ್ದ ಗುಂಪು ಘರ್ಷಣೆ, ದೊಂಬಿ, ಹಲ್ಲೆ, ನೈತಿಕ ಪೊಲೀಸ್ಗಿರಿ, ಬಲತ್ಕಾರದ ವಸೂಲಿ ಬಾಜಿಯಲ್ಲಿ ಈತನು ಭಾಗಿಯಾಗುತ್ತಿದ್ದ. ಈತನ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲವಾರು ಕೇಸು ದಾಖಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲೂ ಈತ ಕೈಯಾಡಿಸಿದ್ದ. ಇತ್ತೀಚೆಗೆ ಬಂಟ್ವಾಳ, ಮಂಗಳೂರಲ್ಲಿ ಕೆಲವರ ಸಂಪರ್ಕ ಸಾಧಿಸಿಕೊಂಡು ದೊಡ್ಡ ಮಟ್ಟದ ಹಣದ ವ್ಯವಹಾರ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆ ಈತನ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸು ದಾಖಲಾಗಿದೆ. ಇದರಿಂದಾಗಿ ಕಂಗೆಟ್ಟು ತಾಲೂಕಿನಿಂದಲೇ ಪರಾರಿಯಾಗಿ ಬಂಟ್ವಾಳದಲ್ಲಿ ತಾತ್ಕಾಲಿಕವಾಗಿ ಉಳಿದು ಕೊಂಡಿದ್ದ ಎಂದು ತಿಳಿದುಬಂದಿದೆ.
0 comments:
Speak up your mind
Tell us what you're thinking... !